Tuesday, June 15, 2010

ವಚನಗಳು/Vachanas,


ಕರಸ್ಥಲದ ಜ್ಯೋತಿಯದು,ಕರುವಿಟ್ಟೆರದವದು
ಅದರ ನೆಲೆಯ ತಿಳಿದರೆ ನಿಜಾನಂದವಿಹುದು
ಹೊಲಬುದೋರದಿಹ ನಿಸ್ಸೀಮನ
ಹೊಲಬನರಿದು ಕೂಡಿದಾತನ ಮೃಡನು ಕಾಣಾ ರಾಮನಾಥ |

ಅಡಗನೊಳಗೆ ಹಾಲು ಅಡಗಿಪ್ಪ ಭೇದವನು
ಹಾಲೊಳಗೆ ತುಪ್ಪದ ಕಂಪು ಅಡಗಿಪ್ಪ ಪರಿಯನು
ಎಲೆ ಮೃಡನೆ, ನೀನು ಪ್ರಾಣಪ್ರಕೃತಿಯೊಳಡಗಿಹ ಭೇದವನು
ಲೋಕದ ಜಡರೆತ್ತ ಬಲ್ಲ ರೈ ರಾಮನಾಥ |

ಮಾಡಿದ ಕರ್ಮವ ನೋಡಯ್ಯ!
ಎನ್ನ ಮನದಣಿವನ್ನಕ್ಕ ಬೇಡೆನ್ನನು, ಮಾರ್ಕೊಳ್ಳೆನ್ನನು
ಮೇಲೆ ರೂಢಿಗೀಶ್ವರನ ಕೂಡುವೆನು
ನೀರಡಿಸಿದವನಂತೆ ರಾಮನಾಥ |

ಸರ್ಪನು ಕೂರ್ಮನು ದಿಕ್ಕರಿಗಳೆಂಟು
ಭೂಮಿಯ ಹೊತ್ತಿಹರೆಂಬುದು ಅಹರ್ನಿಶ
ಹೊತ್ತಿಪ್ಪವರಿಗೆ ಅತ್ತಲಾಧಾರವೇನು, ಇತ್ತಲಾಧಾರವೇನು?
ಉತ್ತರಗೊಡುವವರಿಗೆ ಇಕ್ಕುವೆ ಮುಂಡಿಗೆಯ
ಎತ್ತುವರುಳ್ಳರೆ ತೋರಿರೈ ರಾಮನಾಥನಲಿ |

ಗಂಡನುಳ್ಳಮ್ಮನ ಗೌರಿ ಎಂದು ಕಂಡಡೆ,
ಭೂಮಂಡಲಕ್ಕೆ ಅರಸಾಗಿ ಪುಟ್ಟುವನಾತನು
ಗಂಡನ್ನುಳ್ಳಮ್ಮನ ಒಡೆವೆರೆದಾತೆ
ನರಕದಲ್ಲಿ ದಿಂಡುಗೆಡೆದಿಪ್ಪನೈ ರಾಮನಾಥ ?
Related Posts Plugin for WordPress, Blogger...

Devara Dasimayya Blog Popular Posts

My Blog List

Facebook Followers